ಪ್ರೀತಿಯ ಎಲ್ಲರಿಗೆ ನಮಸ್ಕಾರ.
ನೀವೆಲ್ಲ ತಿಳಿದಿರುವಂತೆ 2013 KKNC ದೀಪೋತ್ಸವವನ್ನು ಇದೇ ಬರುವ ನವೆಂಬರ್ 16th ಶನಿವಾರ ಗನ್ ಹೈಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ಗಾಯಕರಾದ ಅಜಯ್ ವಾರಿಯರ್ ಮತ್ತು ದಿವ್ಯಾ ರಾಘವನ್ ಅವರ ಸುಮಧರ ಕಂಠದಲ್ಲಿ ನಿಮ್ಮ ನೆಚ್ಚಿನ ಹಳೆಯ ಮತ್ತು ಹೊಸ ಗೀತೆಗಳನ್ನು ಆಲಿಸಲಿದ್ದೀರಿ. ಮಕ್ಕಳಿಗಾಗಿ ಮತ್ತು ನಮ್ಮೆಲ್ಲರಿಗಾಗಿ ಎಮ್ ಡಿ ಕೌಶಿಕ್ ಅವರ ಇಂದ್ರಜಾಲ (ಮ್ಯಾಜಿಕ್ ಶೋ) ಕಾರ್ಯಕ್ರಮವಿದೆ. ಸ್ಥಳೀಯ ಕಲಾವಿದರಿಂದ ವಿವಿಧ ರೀತಿಯ ನೃತ್ಯ ಕಾರ್ಯಕ್ರಮಗಳಿವೆ. ಕಿರುನಾಟಕ ಸ್ಪರ್ಧೆಯಲ್ಲಿ ವಿಜೇತ ತಂಡವೊಂದರಿಂದ ಕಿರುನಾಟಕ. ನಮ್ಮೆಲ್ಲರ ಪ್ರೀತಿಯ ಅಲಮೇಲು ಅಯ್ಯಂಗಾರ್ ಅವರಿಂದ ಸಾಮಾಜಿಕ ನಗೆನಾಟಕ "ಕುಜದೋಷವೋ ಶುಕ್ರದೆಸೆಯೋ" ಅಂದಿನ ವಿಶೇಷ ಕಾರ್ಯಕ್ರಮಗಳಲ್ಲೊಂದು. ನವೆಂಬರ್ 16th KKNC ದೀಪೋತ್ಸವಕ್ಕೆ ಬನ್ನಿ. ಮುಂಬರುವ ವರ್ಷಕ್ಕೆ KKNC ಗೆ ತಕ್ಕ ನಾಯಕನೊಬ್ಬನನ್ನು ಆಯ್ಕೆ ಮಾಡಿಕೊಳ್ಳುವ ಹೊಣೆ ನಿಮ್ಮದು. ೨೦೧೪ರ KKNC ಯ ನಾಯಕತ್ವ ಯಾರದ್ದು ಎಂಬುದು ಅಂದು ನಿರ್ಧಾರವಾಗಲಿದೆ.
KKNC ಗೆ ನಲವತ್ತರ ಹರೆಯ. ಕಳೆದ ನಲವತ್ತು ವರ್ಷಗಳ KKNC ಯ ನಾಯಕರನ್ನು ನೀವಂದು ಕಾಣಲಿದ್ದೀರಿ. ಎಲ್ಲರೂ ಬನ್ನಿ. ದೀಪೋತ್ಸವವನ್ನು ಎಂಜಾಯ್ ಮಾಡಿ! :-)
ವಂದನೆಗಳೊಂದಿಗೆ,
ಪ್ರೀತಿಯಿಂದ,
ಕಾರ್ಯಕಾರಿ ಸಮಿತಿ 2013
ಕನ್ನಡಕೂಟ ಉತ್ತರಕ್ಯಾಲಿಫೋರ್ನಿಯ
|
Deepotsava is Free event for KKNC members, Kids and Visiting Parents.$15 per person for non members
|
Family membership is still open and is just $25. This includes free admission to member, spouse and visiting parents, Swarnasethu magazine and opportunity to participate in SwarnaSethu 2013 release function.
Divya Raghavan Invitation
Ajay Warriar Invitation
Tarle Talkies Promo